ಮತ್ತೆ ಮಮತಾಮಯಿ ಅಮ್ಮನ
ಸತ್ಯದರ್ಶನ;
ಕೊಟ್ಟಷ್ಟೂ ಕಿತ್ತುಕೊಳ್ಳುವ ಕೋತಿಗಳಿಗೆ,
ತುತ್ತು ಹಂಚುವ ಕೆಲಸ!!
ವಾನರನಿಂದ ನರ ಎಂಬುದು,
ನಮಗೆ ತಿಳಿದಿದೆಯಷ್ಟೇ;
ಆದರೆ,
ವಾನರರಲ್ಲೂ ನರನನ್ನು
ಕಾಣುತ್ತಿದ್ದಾಳೆ ತನ್ನ ವಿಶಾಲ ದೃಷ್ಟಿಯಿಂದ!
ಹೆತ್ತು ಸಾಕಿದ ಮಕ್ಕಳೆಲ್ಲ ದೂರ ದೂರ,
ಹೃದಯವಂತೂ ಭಾರ..
ನನಗೆ ಕಪಿಗಳದ್ದು ಕೇವಲ ಕುಚೇಷ್ಟೆಯಲ್ಲ;
ಹರಸಾಹಸ ಮಾಡುತಿವೆ ಅವು,
ನನ್ನ ಮನಸನ್ನು ಹಗುರ ಮಾಡಲು.
ಇದು ತಾಯಿಯ ಒಡಲಾಳದ ನುಡಿ!!
ಮರದಿಂದಿಳಿದ ಮರ್ಕಟಗಳಿಗೆಲ್ಲಾ,
ಅವ್ವ ನೀಡುವ ತುತ್ತು ಮೃಷ್ಟಾನ್ನ ;
ಅವಳ ಮನಸ್ಸೂ ಪ್ರಸನ್ನ !!
ಜೀವನ ಯಾನದಲ್ಲಿ,
ಬಹುಪಾಲು ಕ್ರಮಿಸಿದ ಮೇಲೂ
ಬತ್ತದ ಪ್ರೀತಿಯ ಚಿಲುಮೆ ಇವಳು.
ಮಾತೃ ಪಾದಕ್ಕಿದೋ ನಮನ!!
(ಚಿತ್ರ ಕೃಪೆ:ಮಯೂರ )
-----------------------------------------------------------------------------------------
ಸತ್ಯದರ್ಶನ;
ಕೊಟ್ಟಷ್ಟೂ ಕಿತ್ತುಕೊಳ್ಳುವ ಕೋತಿಗಳಿಗೆ,
ತುತ್ತು ಹಂಚುವ ಕೆಲಸ!!
ವಾನರನಿಂದ ನರ ಎಂಬುದು,
ನಮಗೆ ತಿಳಿದಿದೆಯಷ್ಟೇ;
ಆದರೆ,
ವಾನರರಲ್ಲೂ ನರನನ್ನು
ಕಾಣುತ್ತಿದ್ದಾಳೆ ತನ್ನ ವಿಶಾಲ ದೃಷ್ಟಿಯಿಂದ!
ಹೆತ್ತು ಸಾಕಿದ ಮಕ್ಕಳೆಲ್ಲ ದೂರ ದೂರ,
ಹೃದಯವಂತೂ ಭಾರ..
ನನಗೆ ಕಪಿಗಳದ್ದು ಕೇವಲ ಕುಚೇಷ್ಟೆಯಲ್ಲ;
ಹರಸಾಹಸ ಮಾಡುತಿವೆ ಅವು,
ನನ್ನ ಮನಸನ್ನು ಹಗುರ ಮಾಡಲು.
ಇದು ತಾಯಿಯ ಒಡಲಾಳದ ನುಡಿ!!
ಮರದಿಂದಿಳಿದ ಮರ್ಕಟಗಳಿಗೆಲ್ಲಾ,
ಅವ್ವ ನೀಡುವ ತುತ್ತು ಮೃಷ್ಟಾನ್ನ ;
ಅವಳ ಮನಸ್ಸೂ ಪ್ರಸನ್ನ !!
ಜೀವನ ಯಾನದಲ್ಲಿ,
ಬಹುಪಾಲು ಕ್ರಮಿಸಿದ ಮೇಲೂ
ಬತ್ತದ ಪ್ರೀತಿಯ ಚಿಲುಮೆ ಇವಳು.
ಮಾತೃ ಪಾದಕ್ಕಿದೋ ನಮನ!!
(ಚಿತ್ರ ಕೃಪೆ:ಮಯೂರ )
-----------------------------------------------------------------------------------------