Jul 6, 2012

ಸ್ವಗತ -1

ಕವಿ ಅಥವಾ ಲೇಖಕ ಅವನವನ ಧಾಟಿಯಲ್ಲೇ ಯೋಚಿಸುತ್ತಾನೆ, ಅಂತೆಯೇ ಬರೆಯುತ್ತಾನೆ, ಅದು ಕೆಲವರಿಗೆ 'ಕಾಲಹರಣ' ಎಂದೆನಿಸಿ ಗೊಣಗಬಹುದು, ಕೆಲವರಿಗೆ 'ತಮಾಷೆ' ಎಂದೆನಿಸಿ ಅಪಹಾಸ್ಯ ಮಾಡಬಹುದು.ಎಲ್ಲರ ದೃಷ್ಟಿಕೋನಗಳು ಬೇರೆ ಬೇರೆಯಾಗಿರುತ್ತವೆ ;ಬರೆದುದನ್ನು ಯಾರೂ ಓದುವುದಿಲ್ಲ ಅಥವಾ ಯಾರಾದರೂ ತಮಾಷೆ ಮಾಡುತ್ತಾರೆ ಎಂದೆಲ್ಲಾ ಅನ್ನಿಸತೊಡಗಿದರೆ ಬರೆಯಲು ಆಸಕ್ತಿಯೇ ಇರುವುದಿಲ್ಲ.ಅಕ್ಷರಮೋಹಿಯಾಗಿ,ಪದಗಳ ಒಲವನ್ನು ಸಂಪಾದಿಸಿ,ಆತ್ಮತೃಪ್ತಿಗಾಗಿ ಬರೆಯುವುದನ್ನು ವಾಡಿಕೆ ಮಾಡಿಕೊಂಡರೆ ಬರೆದ ಎಲ್ಲಾ ಸಾಲುಗಳಲ್ಲೂ ಅತೀವ ಆನಂದ ದೊರೆಯುತ್ತದೆ. ನಮಗೆ ನಿರಂತರ ನೆಮ್ಮದಿ ನೀಡುವುದು ನಮ್ಮತನ ಮಾತ್ರ!
-----------------------------------------------------------------------------------------------------------------------------------------------------
ಕನ್ನಡ ಬ್ಲಾಗ್ ಪುಟದಲ್ಲಿ....(comments @KANNADA BLOG- facebook page)...

No comments: